ಇಲಾಹಾಬಾದ್ ಕೋಟೆಯು ಮುಘಲ್ ಸಾಮ್ರಾಟ ಅಕ್ಬರ್ ಭಾರತದ ಉತ್ತರ ಪ್ರದೇಶ ರಾಜ್ಯದ ಅಲಾಹಾಬಾದ್‍ನಲ್ಲಿ ೧೫೮೩ರಲ್ಲಿ ನಿರ್ಮಿಸಿದ ಒಂದು ಕೋಟೆ. ಈ ಕೋಟೆಯು ಯಮುನಾ ನದಿಯ ದಡದ ಮೇಲೆ, ಗಂಗಾ ನದಿಯೊಂದಿಗಿನ ಅದರ ಸಂಗಮದ ಹತ್ತಿರ ನಿಂತಿದೆ. ಭಾರತದ ಪುರಾತತ್ವ ಸರ್ವೇಕ್ಷಣೆಯು ಇದನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಗುರುತಿಸಿದೆ. ಅಕ್ಬರನು ಕೋಟೆಯನ್ನು ಇಲಾಹಾಬಸ್ ("ದೇವರಿಂದ ಅನುಗ್ರಹಿತವಾದ") ಎಂದು ಹೆಸರಿಸಿದನು. ನಂತರ ಇದು "ಇಲಾಹಾಬಾದ್" ಎಂದು ಆಯಿತು. ಇಲಾಹಾಬಾದ್‍ನ ಆಯಕಟ್ಟಿನ ಸ್ಥಳವಲ್ಲದೆ, ಅಕ್ಬರ್ ತ್ರಿವೇಣಿ ಸಂಗಮಕ್ಕೆ ಭೇಟಿನೀಡುವ ಭಾರೀ ಸಂಖ್ಯೆಯ ತೀರ್ಥಯಾತ್ರಿಗಳಿಂದ ತೆರಿಗೆಯನ್ನು ಸಂಗ್ರಹಿಸುವ ಸಾಮರ್ಥ್ಯದಿಂದ ಪ್ರೇರಿತನಾಗಿದ್ದನೆಂದು ಕೂಡ ಭಾವಿಸಲಾಗಿದೆ. ಆದರೆ, ಅಕ್ಬರ್ ಅಸ್ತಿತ್ವದಲ್ಲಿದ್ದ ತೀರ್ಥಯಾತ್ರಿ ತೆರಿಗೆಯನ್ನು ೧೫೬೩ರಲ್ಲಿ ತೆಗೆದುಹಾಕಿದ್ದನು ಎಂಬ ವಾಸ್ತವಾಂಶವನ್ನು ಪರಿಗಣಿಸಿ ಇದು ಅಸಂಭವವೆಂದು ತೋರುತ್ತದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ,